ಶುಕ್ರವಾರ, ಮಾರ್ಚ್ 17, 2017

ವಿವೇಕಾನಂದರು ಭಾರತೀಯ ಮಹಿಳೆಯ ಕುರಿತಾಗಿ---

ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ದೇಶಗಳಿಗೆ ಹೋದಾಗ ಅವರನ್ನು ಜನ ಬಹಳಷ್ಟು ಕೇಳುತ್ತಿದ್ದ ಪ್ರಶ್ನೆಗಳು- “ನಿಮ್ಮ ದೇಶದಲ್ಲಿ ಮಹಿಳೆಯನ್ನು ಕೀಳಾಗಿ ಕಾಣುವರಂತೆ?”, “ನಿಮ್ಮ ದೇಶದಲ್ಲಿ ಹೆಣ್ಣುಶಿಶುಗಳನ್ನು ಕೊಲ್ಲುತ್ತಾರಂತೆ?” ಮುಂತಾದವು. ಪರಕೀಯರ ಕ್ರೌರ್ಯಪೂರ್ಣ ಆಡಳಿತಕ್ಕೆ ಸಿಲುಕಿದ್ದ ಅಂದಿನ ಭಾರತದಲ್ಲಿದ್ದ ಹಲವಾರು ಸಮಸ್ಯೆಗಳೊಂದಿಗೆ ಮಹಿಳೆಯರ ಸಮಸ್ಯೆಗಳು ಸಾಕಷ್ಟು ಇದ್ದವೆನ್ನುವುದೇನೋ ನಿಜವೇ. ಆದರೆ ವಾಸ್ತವದ ಸ್ಥಿತಿಗತಿಗಳನ್ನು ಇರುವುದಕ್ಕಿಂತ ಹೆಚ್ಚಾಗಿ ಉತ್ಪ್ರೇಕ್ಷಿಸಿ ಹೇಳುವುದು ಅಂದಿನ ಮತಾಂತರಿಗಳ ಹಾಗೂ ಇತರ ಡೋಂಗಿ ಸಮಾಜಸೇವಕರ ಹುನ್ನಾರವಾಗಿತ್ತು. ಇದರಿಂದಾಗಿ ಅವರ ಸ್ವಕಾರ್ಯಕ್ಕೆ ಸಾಕಷ್ಟು ಹಣವೂ ದಾನವಾಗಿ ದೊರಕುತ್ತಿತ್ತೆನ್ನಿ. ಭಾರತ ಎಂದರೆ ’ಹಾವಾಡಿಗರ, ಅಜ್ಞಾನಿಗಳ, ಅನಾಗರಿಕರ, ಆಚಾರ ವಿಚಾರಗಳಿಲ್ಲದವರ ಕೊಳಚೆ ಕೇರಿ’ ಎಂಬಂತೆ ವಿಪರೀತ ಚಿತ್ರಣಗಳನ್ನು ಹೆಣೆಯುತ್ತಿದ್ದರು. ಹೀಗಾಗಿ ಭಾರತದ ಗೌರವಕ್ಕೆ ಹಾಗೂ ಸನಾತನ ಸಂಸ್ಕೃತಿಗೆ ಧಕ್ಕೆ ಬರುವಂತಹ ಅಭಿಪ್ರಾಯಗಳು ಬಹಳಷ್ಟು ಹರಡಿದ್ದವು. ಇಂತಹ ಅಭಿಪ್ರಾಯಗಳನ್ನು ಎದುರಿಸುವಾಗ ವಿವೇಕಾನಂದರು ’ಇವು ಭಾರತದ ಕೆಲವು ಪ್ರದೇಶಗಳಲ್ಲಿ ಹಾಗೂ ಜನಾಂಗಗಳಲ್ಲಿ ಮಾತ್ರ ಅಳಿದುಳಿದಿರುವ ಪದ್ಧತಿಗಳೆ ಹೊರತು ಸಮಗ್ರ ಭಾರತದ ಕಥೆಯಲ್ಲ, ವಾಸ್ತವದಲ್ಲಿ ಭಾರತವು ಅಷ್ಟು ವಿಕೃತವಾಗಿಲ್ಲ’ ಎನ್ನುವುದನ್ನು ವಿಧವಿಧವಾಗಿ ಸ್ಪಷ್ಟಪಡಿಸಲೆತ್ನಿಸುತ್ತಿದ್ದರು. ಆದರೆ ಪದೇ ಪದೇ ಇದೇ ಪ್ರಶ್ನೆಗಳನ್ನು ಕೇಳಿ ಬೇಸರವಾಗಿ ಕೆಲವೊಮ್ಮೆ ತಮಾಷೆಯ ಉತ್ತರಗಳನ್ನು ಕೊಟ್ಟಿದ್ದುಂಟು. ಒಮ್ಮೆ ಒಬ್ಬಳು ಮಹಿಳೆ ಕೇಳಿದಳು- “ನಿಮ್ಮ ದೇಶದಲ್ಲಿ ಹುಟ್ಟಿದ ಶಿಶುಗಳನ್ನು ಮೊಸಳೆ ಬಾಯಿಗೆ ಹಾಕುತ್ತಾರಂತೆ?” ವಿವೇಕಾನಂದರು ತಮಾಷೆಯಾಗಿ ಹೇಳಿದರು “ಹೌದಮ್ಮ, ನನ್ನನ್ನೂ ನನ್ನ ಅಮ್ಮ ಮೊಸಳೆಬಾಯಿಗೆ ಹಾಕಿಬಿಟ್ಟಿದ್ದಳು. ನಾನು ಹೇಗೋ ಈಜಿ ತಪ್ಪಿಸಿಕೊಡು ಬಂದುಬಿಟ್ಟೆ!” ಮಹಿಳೆ ಬಿಡದೆ ಕೇಳಿದಳು- “ಅಲ್ಲ ಸ್ವಾಮಿ, ಕೇವಲ ಹೆಣ್ಣು ಮಕ್ಕಳನ್ನೇ ಹಾಕುತ್ತಾರಂತೆ?” ಸ್ವಾಮಿಜಿ ತಮಾಷೆ ಮುಂದುವರೆಸಿ ಹೇಳಿದರು “ಹೆಣ್ಣು ಮಕ್ಕಳ ಚರ್ಮ ಮೃದುವಾಗಿದೆ, ಮೊಸಳೆಗೆ ತಿನ್ನಲು ಸುಲಭಾವಾಗಲಿ ಅಂತ!”
ಆದರೆ ನಮ್ಮ ಸಮಾಜದ ಬಗ್ಗೆ ಜಗದಲ್ಲೆಲ್ಲ ಹರಡಿದ್ದ ಈ ವಿಕೃತ ಕಥೆಗಳನ್ನು ಕಂಡು ದುಃಖಿತರಾದದ ಸ್ವಾಮಿಜಿ ಆ ಅಭಿಪ್ರಾಯಗಳಿಗೆ ಪ್ರತ್ಯುತ್ತರವಾಗಿ ’ಭಾರತದ ಮಹಿಳೆ” (ವುಮೆನ್ ಒಫ಼್ ಇಂಡಿಯಾ”) ಎನ್ನುವ ವಿಶೇಷ ಪ್ರವಚನವನ್ನೇ ಮಾಡಿದರು. ಅದರಲ್ಲಿ ಭಾರತೀಯ ಸಮಾಜದಲ್ಲಿ ಮಹಿಳೆಯ ನೈಜ ಸ್ಥಾನವೇನು, ಅವಳ ಆದರ್ಶಗಳೇನು, ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವಲ್ಲಿ ಅವಳ ಯೋಗದಾನವೇನು ಎನ್ನುವುದನ್ನು ವಿವರಿಸಿದರು. ಇದಲ್ಲದೆ ಇನ್ನೂ ತಮ್ಮ ಹಲವು ಸಂಭಾಷಣೆಗಳಲ್ಲಿ, ಪತ್ರಗಳಲ್ಲಿ, ಪ್ರವಚನಗಳಲ್ಲಿ ಸ್ವಾಮಿಜಿ ಭಾರತೀಯ ನಾರಿಯ ಸ್ವರೂಪದ ಬಗ್ಗೆ ಬೆಳಕು ಚೆಲ್ಲಿದ್ದಾರೆ, ಅಂತೆಯೇ ಆಕೆಗೆ ಪುನರುತ್ಥಾನಕ್ಕೆ ಸಂಬಂಧಿಸಿದಂತೆ ತಮ್ಮ ಸಲಹೆಗಳನ್ನು ಮುಂದಿಡುತ್ತಾರೆ. ಕೆಲವಂಶಗಳನ್ನು ಇಲ್ಲಿ ನೋಡೋಣ-
ಸ್ವಾಮಿಜಿ ಹೇಳುತ್ತಾರೆ- The central idea of a hindu lady is her chastity”. ಪ್ರತಿಯೊಂದು ಜನಾಂಗಕ್ಕೂ ಒಂದು ಆದರ್ಶವಿರುತ್ತದೆ. ಅದು ಆ ಜನಾಂಗದ ಭಾವ, ವಿಚಾರ, ಜೀವನಶೈಲಿಗಳನ್ನು ಪ್ರಭಾವಗೊಳಿಸುತ್ತಲೇ ಇರುತ್ತದೆ. ಭಾರತದ ಆದರ್ಶ ’ಧರ್ಮ’ (ಇಲ್ಲಿ ಧರ್ಮ ಎಂದರೆ ಕೇವಲ ಜಾತಿ, ಮತ/ ರಿಲಿಜನ್ ಎಂದರ್ಥವಲ್ಲ. ಜಗತ್ತಿನ ಹಾಗೂ ವೈಯಕ್ತಿಕ ಹಿತಸಾಧನೆಯ ಮಹತ್ ಸಾಧನವೇ ಧರ್ಮ). ಭಾರತದಲ್ಲಿ ಪುರುಷನಂತೆ ನಾರಿಯೂ ಕೂಡ ಧರ್ಮವನ್ನೇ ತನ್ನ ಆಧಾರವಾಗಿಟ್ಟುಕೊಂಡು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಬೇರೆಲ್ಲ ನೆಲೆಗಳಲ್ಲಿ ತನ್ನನ್ನು ತಾನು ಗುರುತಿಸಿ ಕೊಂಡಿದ್ದಾಳೆ. ಈ ಹಿನ್ನಲೆಯಲ್ಲಿ ನಾರಿ ಕಂಡುಕೊಂಡ ಆದರ್ಶ- ’ಮಾತೃತ್ವ’ ಎಂದು ಸೂಚಿಸುತ್ತಾರೆ ಸ್ವಾಮಿಜಿ -The ideal of womenhood in India is motherhood- that marvelous, unselfish, all suffering, ever forgiving mother.
ನಾರಿ ತನ್ನ ಚಾಪಲ್ಯ, ಸ್ವಾರ್ಥಗಳನ್ನು ಮೆಟ್ಟಿ, ತನ್ನೊಳಗಿನ ಮಾತೃತ್ವ, ಧೈರ್ಯ, ಕ್ರಿಯಾಶೀಲತೆ, ಕಲಾಭಿಜ್ಞತೆ, ಸಂಯಮ, ಸೇವಾಭಾವ ಮುಂತಾದುವನ್ನು ಗುರುತಿಸಿಕೊಂಡು ಅದನ್ನು ತನ್ನ ಆತ್ಮೋದ್ಧಾರಕ್ಕೂ, ಪರಿವಾರದ ಹಾಗೂ ಸಮಾಜದ ಹಿತಕ್ಕೂ ಬಳಸುವುದೆ ಅವಳ ಆದರ್ಶ ಸಾಧನೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ನಾರಿಯಲ್ಲಿನ ಈ ಅದ್ಭುತ ಮಾತೃತ್ವದ ಜಗದುದ್ಧಾರಕ ಶಕ್ತಿಯ ಬಗ್ಗೆ ಹೇಳುತ್ತಾರೆ - Mother is pre eminent. Mother is the impartial energy of the universe, because of the colourless love that asks not, desires not, cares not for the evil in her child, but loves him the more.
ಉತ್ತಮ ನಾರಿಯರಿಂದಲೇ ಉತ್ತಮ ಪೀಳಿಗೆಗಳು ಹುಟ್ಟಿಬರಲು ಸಾಧ್ಯ ಎನ್ನುವುದು ಸ್ವಾಮಿಜಿರವರ ಮಾತಿನಲ್ಲಿ ಧ್ವನಿಸುತ್ತದೆ. Shall we bring to the need of India great women fit to be mothers of heroes, because they are pure and selfless, strong with the strength that comes of touching the feet of God. ಭಾರತೀಯ ನಾರಿಯು ಹೇಗೆ ವ್ರತ-ಪೂಜೆ-ಸಂಯಮಗಳ ಮೂಲಕ ತನ್ನ ದೇಹ-ಮನಸ್ಸು-ಭಾವ-ವಿಚಾರಗಳನ್ನು ಪವಿತ್ರವಾಗಿರಿಸಿಕೊಂಡು ಉತ್ತಮ ಸಂಸ್ಕಾರ-ಸಂಪನ್ನ ಮಕ್ಕಳನ್ನು ಹುಟ್ಟಿಸುತಾಳೆ ಎನ್ನುವುದನ್ನು ವಿವರಿಸುತ್ತಾರೆ- Mother is worshipped why? Because she made herself pue. She underwent harsh penances sometimes to keep herself as pure as purity can be”. “Women pray and worship to have sat santaana--- so did my mother have me too-----”.
ಪಾಶ್ಚಾತ್ಯ ಸಮಾಜದಲ್ಲಿ ಮನೆಯನ್ನು ಆಳುವವಳು ಹೆಂಡತಿಯಾದರೆ, ಭಾರತದಲ್ಲಿ ಆ ಹಕ್ಕು ತಾಯಿಯದು. In the west woman is the wife. In the western home wife rules, in the Indian home the mother rules.  ತಾಯಿಯೇ ಒಂದು ಮನೆತನದ ಅನಭಿಷಿಕ್ತ ಅಚಕ್ರವರ್ತಿನಿ, ಅವಳ ಸ್ಥಾನ ನಿರ್ವಿವಾದ, ಅವಳಿಗೆ ಸಲ್ಲುವ ಗೌರವ ಸರ್ವೋಚ್ಛವಾದದ್ದು ಎನ್ನುವುದನ್ನು ಸ್ವಾಮಿಜಿ ಸೂಚಿಸುತ್ತಾರೆ- The ideal of woman in India is mother, the mother first, the mother last.
ಭಾರತದ ಅವನತಿಗೆ ಮುಖ್ಯ ಕಾರಣಗಳಲ್ಲಿ ಒಂದು ಮಹಿಳೆಯ ಸ್ಥಾನದ ಅವನತಿ ಎನ್ನುವುದನ್ನು ಘೋಷಿಸುತ್ತಾರೆ ಸ್ವಾಮಿಜಿ- India saw degeneration because shakti was insulted- our women were looked down upon…. ನಾರಿಯ ಪುನರುತ್ಥಾನವಿಲ್ಲದೆ ಜಗತ್ತಿಗೂ ಒಳಿತಾಗದು ಎನ್ನುತ್ತಾರೆ- There is no chance of the welfare of the world unless the condition of women is improved. It is not possible for a bird to fly on one wing.
ವೇದಕಾಲದ ಗಾರ್ಗಿ ಮೈತ್ರೇಯಿಯರ, ಬೌದ್ಧಯುಗದ  ಸಂಘಮಿತ್ರಾ ಮುಂತಾದ ಸ್ವತ್ದದ ನಾರಿಯರ ಸಂಖ್ಯೆ ಪರಕೀಯ ಆಕ್ರಮಣ ಆಡಳಿತಗಳ ಯುಗಗಳಲ್ಲಿ ಕ್ಷೀಣಿಸಿ ಭಾರತದ ನಾರೀ ಕುಲವೇ ದುರ್ಬಲವೂ ಅಸಹಾಕಯವೂ ಆಗುತ್ತ ಬಂದದ್ದನ್ನು ಕಂಡು ಸ್ವಾಮಿಜಿರವರ ಹೃದಯ ಮರುಗಿತು. ಒಂದೆಡೆ ನಾರಿಯನ್ನು ಆದ್ಯಾಶಕ್ತಿ ಸ್ವರೂಪಿಣೀ ಎಂದು ಆದರಿಸಿ ವರ್ಣಿಸಿದರೂ ಮತ್ತೊಂದೆಡೆ ಸ್ತ್ರೀಯನ್ನು ಶೋಷಿಸುವ, ಕೀಳೆಂದು ಹೀಗಳೆಯುವ, ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣುವ ಕುಬುದ್ಧಿಯೂ ಬೆಳೆದದ್ದೇ ನಮ್ಮ ದೇಶದ ಇಂತಹ ಘೋರ ಅವನತಿಗೆ ಕಾರಣ ಎನ್ನುವ ಅಭಿಪ್ರಾಯವನ್ನು ಮುಂದಿಡುತ್ತಾರೆ. ನಿಜ, ಸ್ತ್ರೀಯನ್ನು ವಿದ್ಯಾಧಿಕಾರದಿಂದ ವಂಚಿತವಾಗಿಸುತ್ತ ಬಂದ ಈ ಸಮಾಜದಲ್ಲಿ ಅವಳು ದುರ್ಬಲಳೂ ಸಂಸ್ಕಾರಹೀನಳೂ ಆಗುತ್ತ ಬಂದಳು. ಇಂತಹ ಸ್ತ್ರೀಯಿಂದ ಹುಟ್ಟುವ ಪೀಳಿಗೆಗಳು ದುರ್ಬಲವೂ ನಿರ್ವೀರ್ಯವೂ ಆಗುತ್ತ ಬಂದವು. ಜನಾಂಗಗಳು ದುರ್ಬಲವಾದಂತೆ, ಪರಕೀಯ ಆಕ್ರಮಣಗಳಿಗೆ ದೇಶವು ಸುಲಭದಲ್ಲಿ ತುತ್ತಾಗುತ್ತ ಬಂತು. ಅಷ್ಟೇ ಅಲ್ಲ, ಸ್ತ್ರೀಯನ್ನು ಭೋಗ ಸಾಧನವೆಂಷ್ಟೇ ಕಾಣುವ ದುಷ್ಟಸಂಸ್ಕೃತಿಗಳು ನಮ್ಮನ್ನು ಆಳತೊಡಗಿದಾಗ, ಸ್ತ್ರೀಯ ಸ್ಥಾನ, ವಿದ್ಯೆ, ಸಾಮಾಜಿಕ ಹಕ್ಕುಗಳು, ಇನ್ನಷ್ಟು ಕುಗ್ಗುತ್ತ ಬಂದವು. ಆದರೆ ಅದನ್ನೆಲ್ಲ ಆಗಿಂದಾಗ್ಗೆ ಸರಿ ಪಡಿಸದೇ ಇದ್ದು, ಸ್ತ್ರೀಯನ್ನು ಮತ್ತೆ ತನ್ನ ಹಿಂದಿನ ವಿಭವಕ್ಕೆ ಏರಿಸದೆ ಅವಳನ್ನು ಶಾಶ್ವತವಾದ ಪರಾಧೀನತೆಗೆ, ದಾಸ್ಯದ ಕೂಪಕ್ಕೆ ಇಳಿಸಿದ ಸಮಾಜದ ಬಗ್ಗೆ ಕಿಡಿಕಾರುತ್ತಾರೆ ಸ್ವಾಮಿಜಿ- Circumstances have forced upon us, for centuries, the woman’s need of protection. This and not her inferiority, is the true reading of our customs.
ಮಹಿಳೆಯ ಪುನರುತ್ಥಾನಕ್ಕಾಗಿ ಏನು ಮಾಡಬೇಕು ಎನ್ನುವುದನ್ನೂ ಸ್ವಾಮಿಜಿ ಸ್ಪಷ್ಟಪಡಿಸುತ್ತಾರೆ- Educate you women and leave them. They will take care of themselves”. ಸ್ತ್ರೀಯರಿಗೆ ತಾವೇ ಉದ್ಧಾರವಾಗಲು ಸ್ವಸಾಮರ್ಥ್ಯವಿಲ್ಲ ಎಂಬ ಅಧಿಕಪ್ರಸಂಗದಿಂದಲೋ ಮಿತಿಮೀರಿದ ಸಹಾನುಭೂತಿಯಿಂದಲೋ ಅವರ ಯೋಗಕ್ಷೇಮವನ್ನು ತಾವೇ ವಹಿಸುವುದಾಗಿ, ಅವರ ಪರವಾಗಿ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುವುದಾಗಿ ಹಸ್ತಕ್ಷೇಪ ಮಾಡುವ ದುರುತ್ಸಾಹಿ ಪುರುಷರನ್ನು ಸ್ವಾಮಿಜಿ ಎಚ್ಚರಿಸುತ್ತಾರೆ- Hands off----!” ಎಂದು! ಮತ್ತೆ ಗುಡುಗುತ್ತಾರೆ- “Women must be put in a position to solve their own problems their own way. No one can or ought to do this for them. And Indian women are capable of doing it as any in the world”.
ಭಾರತದ ಮಹಿಳೆಗೆ ಸ್ವಾಮಿಜಿರವರ ಸಂದೇಶ- I would say exactly what I say to men, Believe in India and in our Indian faith. Be strong and hopeful and remember that with something to take, Hindus have immeasurably more to give than any other people in the world”.
ಸನಾತನ ಮೌಲ್ಯಗಳು ಹಾಗೂ ಆಧುನಿಕ ಪ್ರಗತಿಪರ ಮನೋಭಾವಗಳ ಸುಂದರ ಸಂಗಮದಿಂದ ನವಯುಗದ ನಾರಿ ಮೂಡಿ ಬರಲಿ ಎಂಬುದು ಸ್ವಾಮಿಜಿರವರ ಹಂಬಲ. ಅವರ ಕಾಲದಲ್ಲಿ ಶಿಕ್ಷಣದ ಅಭಾವ ಹಾಗೂ ಸಮಾಜಿಕ ಕಟ್ಟಲೆಗಳಿಂದಾಗಿ ಹೆಣ್ಣುಮಕ್ಕಳು ತಮ್ಮ ಅಂತಸ್ಸತ್ವವನ್ನು ಮರೆತು ಮರೆಯಲ್ಲಿದ್ದದ್ದನ್ನು ಕಂಡು ಮರುಗಿ, ನಾರಿಯು ತನ್ನ ಗತವೈಭವದ ಸ್ಥಾನವನ್ನು ಪಡೆಯಬೇಕು ಎಂದು ಹಂಬಲಿಸಿದರು ಸ್ವಾಮಿಜಿ. ಕಲ್ಕತ್ತೆಯಲ್ಲಿನ ದುರ್ಗಾಮಾಳ ಪಾಠಶಾಲೆಯಲ್ಲಿ ಹೆಣ್ಣುಮಕ್ಕಳು ಒಳ್ಳೆಯ ವಿದ್ಯಾವತಿಯರಾಗುತ್ತಿರುವುದನ್ನು ಕಂಡು ತುಂಬ ಮೆಚ್ಚಿದರು ಸ್ವಾಮಿಜಿ. ಸೋದರಿ ನಿವೇದಿತಾಳು ತೆರೆದ ಹೆಣ್ಣು ಮಕ್ಕಳ ಶಾಲೆಗೆ ಮೂಲ ಪ್ರೇರಣೆ, ಸಹಕಾರ ಹಾಗೂ ಮಾರ್ಗದರ್ಶನ ಸ್ವಾಮಿ ವಿವೇಕಾನಂದರದೇ ಆಗಿತ್ತು. ಕೇರಳದ ರಾಜಮನೆತನದ ಹೆಂಗಳೆಯರು ತಮ್ಮೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಶಾಸ್ತ್ರಚರ್ಚೆ ಮಾಡಿದಾಗ ಸ್ವಾಮಿಜಿಗಾದ ಆನಂದ ಅಷ್ಟಿಷ್ಟಲ್ಲ!
ಹೆಣ್ಣುಮಕ್ಕಳಿಗೆ ಶಾಲೆಗಳನ್ನು ತೆರೆಯುವುದಲ್ಲದೆ, ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲವಾಗುವ ಪರಿಸರ ದೇಶದಲ್ಲಿ ನಿರ್ಮಾಣವಾಗಲಿ ಎಂದು ಬಹಳ ಬಯಸಿದ್ದರು. ಅಧ್ಯಾತ್ಮದಲ್ಲೂ ಶಾಸ್ತ್ರಪ್ರಾವೀಣ್ಯದಲ್ಲೂ ಅವರಿಗೆ ಅನುಕೂಲವಾಗುವಂತೆ ಶಾರದಾ ಮಠದ ನಿರ್ಮಾಣಕ್ಕೆ ನಾಂದಿ ಹಾಕಿದ್ದರು. ಹೇಳುತ್ತಾರೆ- “ಶಾರದಾದೇವಿಯವರನ್ನು ಕೇಂದ್ರವಾಗಿರಿಸಿಕೊಂಡು ಮತ್ತೊಮ್ಮೆ ಗಾರ್ಗಿ ಮೈತ್ರೇಯಿಯರು ಜನಿಸಿ  ಬರಲಿದ್ದಾರೆ” ರಾಮಕೃಷ್ಣ ಮಠ ಮಿಶನ್ ಗಿಂತೆ ಹೆಚ್ಚಿನ ಆದ್ಯತೆಯನ್ನೇ ಇದಕ್ಕೆ ನೀಡಿದರು ಎನ್ನುವುದು ಈ ಮಾತಿನ ಮೂಲಕ ಸ್ಪಷ್ಟವಾಗುತ್ತದೆ- “ಮೊದಲು ಶಾರದಾದೇವಿಯವರು ಹಾಗೂ ಅವರ ಸ್ತ್ರೀ ಸಂತಾನ ಆಮೇಲೆ ರಾಮಕೃಷ್ಣರು ಹಾಗೂ ಅವರ ಪುರುಷಸಂತಾನ”. ವೈದಿಕ ಪರಂಪರೆಯ ಸಾತ್ವಿಕ ತೇಜಸ್ಸಿನೊಂದಿಗೆ ಆಧುನಿಕ ಯುಗದ ಪ್ರಗತಿಪರತೆಯೂ ಸಂಗಮಿಸಿ ನವಯುಗದ ಧೀರ ಸತ್ವಸಂಪನ್ನ ನಾರಿ ಅರಳಿ ಬರಲಿ ಎಂಬ ಕನಸನ್ನು ಮುಂಡಿಡುತ್ತಾರೆ ಸ್ವಾಮಿಜಿ. Shall we bring to the need of India great fearless women- women worthy to continues the traditions of sanghamitta, Lila, Ahalya Bai, meerabai, - women fit to be mothers of heroes, because they are pure and selfless, strong with the strength that comes of touching the feet of God.
ನಾರಿಯ ಮನಸ್ಸನ್ನು ಸಂಸ್ಕರಿಸುವ ವಿಷಯದಲ್ಲಿ ಹೆಚ್ಚಿನ ಆಸ್ಥೆ ವಹಿಸುವಂತೆ ಸೂಚಿಸುತ್ತಾರ್ರೆ ಸ್ವಾಮಿಜಿ- Never allow you women to read filthy and impure stuff---- train them in religion, culture house work and enlightening aspects of our tradition. Mould them in Sita’s ideal.
ಸನಾತನ ಸಂಸ್ಕೃತಿಯ ಸರ್ವಾಂಶಗಳನ್ನು ಉಳಿಸಿ ಬೆಳೆಸಿ ತಂದವರು ಬಹುಮಟ್ಟಿಗೆ ಮಹಿಳೆಯರೆ. ತಮ್ಮ ಚಾರಿತ್ರ್ಯ, ಧೈರ್ಯ, ಹಾಗೂ ತ್ಯಾಗಪೂರ್ಣ ಜೀವನದಿಂದ ಪರಿವಾರವನ್ನಷ್ಟೇ ಅಲ್ಲ, ಸಮಾಜವನ್ನು, ದೇಶವನ್ನು ಕಟ್ಟಿದ ನಾರಿಯ ಕುರಿತಾಗಿ ಸ್ವಾಮಿಜೆಗೆ ಅಪಾರ ಗೌರವ. ಭಾರತದ ನಾರಿ ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ರಂಗಗಳಲ್ಲಿ ತನ್ನ ನಿರ್ವಿವಾದಿತ ಸ್ಥಾನವನ್ನು ಗುರುತಿಸಿಕೊಂಡು ಅರಳಿ ನಿಲ್ಲಬೇಕು, ತನ್ಮೂಲಕ ವಿಶ್ವಕ್ಕೇ ಆದರ್ಶಪ್ರಾಯಳಾಗಬೇಕು ಎಂದು ಸೂಚಿಸುತ್ತಾರೆ ಸ್ವಾಮಿಜಿ- The hindu women are very spiritual and religious, perhaps more so than any other women in the world. If we can preserve these beautiful characteristics and at the same time develop the intellects of our women, the hindu woman of the future will be the ideal woman of the world.
ವಿವೇಕಾನಂದರ ಸ್ಫೂರ್ತಿ ಭಾರತೀಯರಿಗೆ, ಅದರಲ್ಲೂ ನಾರಿಯರಿಗೆ ಎಲ್ಲ ಕಾಲಕ್ಕೂ ಪ್ರೇರಕವಾದದ್ದು, 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ